Health & Fitness

  • ಬೆಳಗಾವಿ ಜಿಲ್ಲೆಯಲ್ಲಿ ಏರುತ್ತಿರುವ ತಾಪಮಾನ; ಜನ ಹೈರಾಣ: ವೈದ್ಯರ ಸಲಹೆಗಳು ಬೇಸಿಗೆಯಲ್ಲಿ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆಗಳು

    ಬೆಳಗಾವಿ : ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ 40 ಡಿಗ್ರಿಗಿತಂತಲೂ ಮೇಲ್ಪಟ್ಟು ಉಷ್ಣಾಂಶ ವರದಿಯಾಗುತ್ತಿದೆ. ಇನ್ನು ಮುಂದೆಯೂ ಉಷ್ಣಾಂಶ ಮತ್ತಷ್ಟು ಹೆಚ್ಚಾಗಲಿದ್ದು, ಬಿಸಿಗಾಳಿಯ ಭೀತಿಯೂ ಇದೆ.   ಬಿಸಿಲು, ತಾಪ, ಧಗೆಯಿಂದಾಗಿ ಜನ ಹೈರಾಣಾಗಿದ್ದು ಫ್ಯಾನ್‌, ಎಸಿ (ಹವಾನಿಯಂತ್ರಿತ)ಗಳ ಮೊರೆ ಹೋಗಿದ್ದಾರೆ.   ವಿದ್ಯುತ್‌ ಸರಬರಾಜು ಕಡಿತಗೊಂಡರಂತೂ ಮನೆಯಲ್ಲಿ ಕುಳಿತುಕೊಳ್ಳಲು ಆಗುವುದೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ನಗರ, ಗ್ರಾಮಾಂತರ ವ್ಯಾಪ್ತಿಯಲ್ಲಿ ದುರಸ್ಥಿ ಮತ್ತು ಇತರ ಕಾರಣಗಳಿಗಾಗಿ ಬೆಳಿಗ್ಗಿನಿಂದ ಸಂಜೆವರೆಗೆ ವಿದ್ಯುತ್ ತೆಗೆಯುತ್ತಿರುವುದು ಜನರನ್ನು ಮತ್ತಷ್ಟು ಚಿಂತೆಗೆ ದೂಡಿದೆ.   ಕಳೆದ…

    Read More »
  • ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 24X7 ರೇಡಿಯಾಲಜಿ ಸೇವೆ ವಿವಿಧ ರೋಗ ಪತ್ತೆ ಮಾಡುವ ಅತ್ಯಾಧುನಿಕ ಯಂತ್ರ

    ಬೆಳಗಾವಿ: ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ವಿವಿಧ ರೋಗ ಪತ್ತೆ ಮಾಡುವ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಗತ್ಯ ಪೂರೈಸುವ ಸಲುವಾಗಿ 24X7 ಸೇವೆ ಆರಂಭಿಸಲಾಗಿದೆ. ರೇಡಿಯಾಲಾಜಿ ವಿಭಾಗದಲ್ಲಿ ಈಗ ಎರಡು ಸಿಟಿ ಸ್ಕ್ಯಾನ್‌ ಯಂತ್ರ, ಒಂದು ಎಂಆರ್‌ಐ, ನಾಲ್ಕು ಫಿಕ್ಸ್ಡ್‌ ಎಕ್ಸ್‌ರೇ ಯಂತ್ರ, 15 ಪೋರ್ಟೇಬಲ್‌ ಎಕ್ಸ್‌ರೇ ಯಂತ್ರ, 6 ಅಲ್ಟ್ರಾಸೌಂಡ್‌ ಯಂತ್ರಗಳು ಸುಸ್ಥಿತಿಯಲ್ಲಿವೆ. ಮೂರು ಹಂತಗಳಲ್ಲಿ ದಿನದ 24 ಗಂಟೆಯೂ ಸೇವೆ ನೀಡುತ್ತಿವೆ. ಈ ಮುಂಚೆ 200ರಿಂದ 250 ರೋಗಿಗಳು ರೋಗ ಪತ್ತೆಗಾಗಿ ಬರುತ್ತಿದ್ದರು. ಈ…

    Read More »
  • ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ; ಉಜ್ವಲ ನಗರದಲ್ಲಿ ಕೆಎಲ್‌ಇ ನೂತನ ಆಸ್ಪತ್ರೆ ಆರಂಭ

    ಬೆಳಗಾವಿ: ಜನರ ಮನೆಬಾಗಿಲಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ನಗರ ಮತ್ತು ಇನ್ನೀತರ ಪ್ರದೇಶಗಳಲ್ಲಿ ಕೆಎಲ್‌ಇ ಆಸ್ಪತ್ರೆಯನ್ನು ತೆರೆಯಲಾಗುತ್ತಿದೆ. ಈಗಾಗಲೇ ಬೆಳಗಾವಿ ನಗರದಲ್ಲಿ ನಾಲ್ಕು ಕೇಂದ್ರಗಳನ್ನು ತೆರೆದು ಜನಸೇವೆಗೆ ಅರ್ಪಿಸಲಾಗಿದೆ. ಈಗ ಉಜ್ವಲ ನಗರದಲ್ಲಿ ಪ್ರಾರಂಭಿಸಿದ್ದು, ಜನರು ಇದರ ಸದುಪಯೋಗವನ್ನು ಪಡೆದುಕೊಲ್ಳುವಂತೆ ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಕರೆ ನೀಡಿದರು. ಬೆಳಗಾವಿಯ ಉಜ್ವಲ ನಗರದಲ್ಲಿ ಕೆಎಲ್‌ಇ ಸಂಸ್ಥೆಯು ನೂತನವಾಗಿ ನಿರ್ಮಿಸಿದ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಸಮಾಜ ಸುಧಾರಣೆ ಸಾಧ್ಯ. ಅದಕ್ಕನುಗುಣವಾಗಿ ಶಿಕ್ಷಣದ ಜೊತೆಗೆ ಆರೋಗ್ಯ ಕಲ್ಪಿಸುವ ಕರ‍್ಯ…

    Read More »
  • Hemoglobin: ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿದ್ದರೆ ಈ 10 ಹಣ್ಣು ಸೇವಿಸಿ

    ಹಿಮೋಗ್ಲೋಬಿನ್ ಕಬ್ಬಿಣದ ಅಂಶವನ್ನು ಹೊಂದಿರುತ್ತದೆ. ಇದು ನಾವು ಉಸಿರಾಡುವ ಗಾಳಿಯಿಂದ ಆಮ್ಲಜನಕವನ್ನು ತೆಗೆದುಕೊಳ್ಳಲು ಮತ್ತು ದೇಹದ ಎಲ್ಲೆಡೆ ಅದನ್ನು ತಲುಪಿಸಲು ಅನುವು ಮಾಡಿಕೊಡುತ್ತದೆ. ಹಿಮೋಗ್ಲೋಬಿನ್ ಕಬ್ಬಿಣ, ಆಮ್ಲಜನಕದ ಸಾಗಣೆಯ ಪ್ರೋಟೀನ್, ಕೆಂಪು ರಕ್ತ ಕಣಗಳಲ್ಲಿ ಇರುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುವ ಹಣ್ಣುಗಳಿವು.   ಭಾರತದಲ್ಲಿ ರಕ್ತಹೀನತೆ ಬಹಳ ಆತಂಕಕ್ಕೆ ಕಾರಣವಾಗುವ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಇತ್ತೀಚಿನ ಅನೇಕ ಸಮೀಕ್ಷೆಗಳ ಪ್ರಕಾರ, ಲಕ್ಷಾಂತರ ಭಾರತೀಯ ಯುವತಿಯರು ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಂಪು ರಕ್ತ ಕಣಗಳ (Red Blood Cells) ಪ್ರಮುಖ ಕಾರ್ಯವೆಂದರೆ ಶ್ವಾಸಕೋಶದಿಂದ ದೇಹದ…

    Read More »
  • ಕರ್ಬೂಜ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…?

    ದೇಹದ ಆರೋಗ್ಯಕ್ಕೆ ಸಹಕಾರಿ ಈ ಕರ್ಬೂಜ. ಕರ್ಬೂಜ ಹಣ್ಣು ದೇಹಕ್ಕೆ ತಂಪು ಕೊಡುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಇದು ಉಪಕಾರಿ. ಬೇಸಿಗೆಯಲ್ಲಿ ಸಿಗುವ ಈ ಕರ್ಬೂಜ ಹಣ್ಣನ್ನು ತಿನ್ನುವುದರಿಂದ ಪಿತ್ತ ಶಮನವಾಗುತ್ತದೆ. ಉಷ್ಣ ಸಮಸ್ಯೆ ನಿವಾರಣೆ ಆಗುತ್ತದೆ. ಚರ್ಮ ವ್ಯಾಧಿಗಳು, ಮುಖದ ಮೇಲೆ ನೆರಿಗೆಗಳು, ತಲೆ ಕೂದಲು ಉದುರುವುದು, ಹೊಟ್ಟೆ ಉರಿ, ಕಣ್ಣಲ್ಲಿ ಉರಿ, ಅಂಗೈ, ಅಂಗಾಲು ಉರಿಯುವಿಕೆ, ಮಲಬದ್ಧತೆಯನ್ನು ನಿವಾರಿಸುತ್ತದೆ. ಕಫದ ತೊಂದರೆ ಇರುವವರು ಕರ್ಬೂಜ ಹಣ್ಣನ್ನು ಹಿತಮಿತವಾಗಿ ಸೇವಿಸುವುದು ಒಳ್ಳೆಯದು. ಅತಿಯಾಗಿ ಬಳಸಿದರೆ ಕಫದ ತೊಂದರೆಗಳು ಜಾಸ್ತಿಯಾಗುತ್ತವೆ. ಹಾಗೇನೇ ಕರ್ಬೂಜದ ಹಣ್ಣನ್ನು…

    Read More »
  • ಮಕ್ಕಳ ತೂಕ ಕಡಿಮೆಯಾಗಿದ್ದರೆ ಚಿಂತೆ ಬಿಡಿ..! ಮಕ್ಕಳ ಎತ್ತರ ಮತ್ತು ತೂಕ ಹೆಚ್ಚಿಸಲು ಹೀಗೆ ಮಾಡಿ: ಈ ರೀತಿಯ ಆಹಾರ ನೀಡಿ..!

    ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗೆ ಆಹಾರ ತಿನ್ನಿಸುವುದೇ ದೊಡ್ಡ ಸವಾಲಾಗಿದೆ. ಏಕೆಂದರೆ ಮಕ್ಕಳು ಸರಿಯಾದ ಸಮಯಕ್ಕೆ ಸರಿಯಾಗಿ ಏನನ್ನು ಸೇವಿಸುವುದಿಲ್ಲ. ಹೀಗಾಗಿ ಮಕ್ಕಳ ತೂಕ ಅವರ ವಯಸ್ಸಿಗಿಂತ ಕಡಿಮೆಎ ಇರುತ್ತದೆ. ಇದು ಎಲ್ಲಾ ಪೋಷಕರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.   ಮಕ್ಕಳು ಒಳ್ಳೆ ತೂಕ ಮತ್ತು ಎತ್ತರ ಹೊಂದಬೇಕೆಂದರೆ 1-3 ವರ್ಷದಲ್ಲಿಯೇ ಉತ್ತಮ ಪೋಷಣೆ ನೀಡಬೇಕು. ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಮಕ್ಕಳ ತೂಕ ಮತ್ತು ಎತ್ತರವನ್ನು ಪರೀಕ್ಷಿಸಿ ಅವಶ್ಯಕತೆಗೆ ತಕ್ಕಂತೆ ಪೋಷಣೆ ನೀಡಿದರೆ ಮುಂದೆ ಮಕ್ಕಳು ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ತಡೆಯಬಹುದು. ಮಕ್ಕಳ ಎತ್ತರ ಮತ್ತು ತೂಕ…

    Read More »
  • ಪೌಷ್ಟಿಕಾಂಶಗಳ ಆಗರ ಆಲೂಗಡ್ಡೆ ʼಆಲೂಗಡ್ಡೆʼ ಸಿಪ್ಪೆ ಸಮೇತ ಸೇವಿಸಿದ್ರೆ ಇದೆ ಈ ʼಆರೋಗ್ಯʼ ಪ್ರಯೋಜನ

    ಕೆಲವು ಖಾದ್ಯಗಳನ್ನು ತಯಾರಿಸುವಾಗ ಆಲೂಗಡ್ಡೆಯ ಸಿಪ್ಪೆ ತೆಗೆಯುವುದು ಅನಿವಾರ್ಯ. ಹಾಗೆಂದು ಪ್ರತಿಬಾರಿಯೂ ಅದನ್ನೇ ರೂಢಿಸಿಕೊಳ್ಳದಿರಿ. ಆಲೂಗಡ್ಡೆ ಸಿಪ್ಪೆಯಲ್ಲೂ ಸಾಕಷ್ಟು ಪೋಷಕಾಂಶಗಳಿವೆ ಎಂಬುದು ನಿಮಗೆ ತಿಳಿದಿರಲಿ. ಆಲೂಗಡ್ಡೆಯ ಸಿಹಿಯನ್ನು ನಿಯಂತ್ರಿಸಿ ಮಧುಮೇಹಿಗಳಿಗೆ ಇದರ ಸೇವನೆಯಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ವಿಶೇಷ ಗುಣ ಆಲೂಗಡ್ಡೆಗಿದೆ. ಇದನ್ನು ಸಿಪ್ಪೆ ಸಮೇತ ಸೇವಿಸಿದರೆ ನಿಮ್ಮ ದೇಹಕ್ಕೆ ಹೆಚ್ಚುವರಿ ಫೈಬರ್ ದೊರೆಯುತ್ತದೆ. ಸಕ್ಕರೆ ಮಟ್ಟವೂ ನಿಯಂತ್ರಣದಲ್ಲಿ ಇರುತ್ತದೆ. ಇದು ಪೊಟ್ಯಾಶಿಯಂನ ಆಗರವಾಗಿದ್ದು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಹಾಗಾಗಿ ಬಿಪಿ ಸಮಸ್ಯೆ ಇರುವವರು ಇದನ್ನು ಸಿಪ್ಪೆ ಸಮೇತ ಸೇವಿಸುವುದು ಬಹಳ ಒಳ್ಳೆಯದು. ರಕ್ತಹೀನತೆ…

    Read More »
  • ಯಾವ ಯಾವ ಸಮಯದಲ್ಲಿ ನೀರು ಕುಡಿಯುವುದು ಆರೋಗ್ಯಕರ…?

    ನೀರು ಆರೋಗ್ಯದ ಮೂಲ ಮಂತ್ರ. ಹೆಚ್ಚು ಹೆಚ್ಚು ನೀರು ಕುಡಿದಷ್ಟು ಆರೋಗ್ಯವಂತರಾಗಿರ್ತೇವೆ. ಆಹಾರಕ್ಕಿಂತ ಜಾಸ್ತಿ ನೀರು ಸೇವನೆ ಮಾಡಿ ಅಂತಾ ವೈದ್ಯರು ಕೂಡ ಹೇಳ್ತಾರೆ. ಆದ್ರೆ ಆಚಾರ್ಯ ಚಾಣಕ್ಯ ಎಷ್ಟು ನೀರು ಕುಡಿಯಬೇಕು? ಯಾವಾಗ ಕುಡಿಯಬೇಕು ಎನ್ನುವ ಬಗ್ಗೆ ಏನು ಹೇಳಿದ್ದಾರೆ ಎಂಬುದು ನಿಮಗೆ ಗೊತ್ತಾ?   ಆಹಾರ ಸೇವಿಸುವ ಕೆಲವೇ ಕ್ಷಣದ ಮೊದಲು ನೀರು ಕುಡಿಯಬಾರದು ಎನ್ನುತ್ತಾರೆ ಚಾಣಕ್ಯ. ಆಹಾರ ಸೇವನೆಗಿಂತ ಮೊದಲು ತುಂಬಾ ನೀರು ಕುಡಿದ್ರೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಆಹಾರ ಸೇವಿಸಿದ ತಕ್ಷಣವೂ…

    Read More »
  • ಆರು ಗಂಟೆಗಿಂತ ಕಡಿಮೆ ನಿದ್ರೆ ಸಾವಿಗೆ ಸುಲಭ ದಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಕೆಲಸ ಹಾಗೂ ಒತ್ತಡದ ಕಾರಣದಿಂದಾಗಿ ಜನರು ನಿದ್ರೆ ಮಾಡೋದೆ ಕಡಿಮೆ ಆಗಿದೆ. ರಾತ್ರಿ ಮೂರ್ನಾಲ್ಕು ಗಂಟೆ ನಿದ್ರೆ ಮಾಡುವವರಿದ್ದಾರೆ. ಮತ್ತೆ ಕೆಲವರು ಟಿವಿ, ಮೊಬೈಲ್‌ ಹಿಡಿದು ತಡರಾತ್ರಿಯವರೆಗೆ ಗ್ಯಾಜೆಟ್‌ ವೀಕ್ಷಣೆ ಮಾಡ್ತಾ ಬೆಳಗಿನ ಜಾವ ನಿದ್ರೆಗೆ ಜಾರುತ್ತಾರೆ. ಉತ್ತಮ ಅಹಾರ, ಒಳ್ಳೆಯ ಜೀವನಶೈಲಿ ಜೊತೆ ಉತ್ತಮ ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. 7-8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ಪ್ರಯೋಜನಕಾರಿ. ಒಬ್ಬ ವ್ಯಕ್ತಿ ಇದಕ್ಕಿಂತ ಕಡಿಮೆ ನಿದ್ರೆ ಮಾಡಿದ್ರೆ ಅನೆಕ ಗಂಭೀರ ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ನಿಮಗೆ ಏಳರಿಂದ ಎಂಟು ಗಂಟೆ ನಿದ್ರೆ ಸಾಧ್ಯವಿಲ್ಲ ಎಂದಾದ್ರೆ ಬಹಳ…

    Read More »
  • ಸಾಸ್‌ನಲ್ಲೂ ಈಗ ನಾನಾ ವೆರೈಟಿಯ ಸಾಸ್‌ಗಳು ಇದೆ. ಸಾಸ್‌ ಹಾಕಿ ತಿನ್ನಲು ರುಚಿ ಆದರೆ ದೇಹದ ಮೇಲೆ ಇದು ಬೀರುವ ಪ್ರಭಾವ ಗೊತ್ತೇ?

    ಕೆಲವರು ಚಪಾತಿಯಿಂದ ಹಿಡಿದು ಫ್ರೈಡ್‌ರೈಸ್‌, ಪಿಜ್ಜಾ ಮೇಲೆಲ್ಲಾ ಟೊಮ್ಯಾಟೋ ಸಾಸ್‌ ಸುರಿದುಕೊಂಡು ತಿಂದುಬಿಡುತ್ತಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಟೊಮ್ಯಾಟೋ ಸಾಸ್‌ ಒಳ್ಳೆಯದಲ್ಲ ಎಂದು ಹೇಳುವುದನ್ನು ಕೇಳಿಸಿಕೊಂಡರೂ, ಸಾಸ್‌ ಇಲ್ಲದೇ ಫಾಸ್ಟ್‌ಫುಡ್‌ಗಳು ಯಾವುದೂ ಹೊಟ್ಟೆ ಸೇರಲ್ಲ.   ಸಾಸ್‌ನಲ್ಲೂ ಈಗ ನಾನಾ ವೆರೈಟಿಯ ಸಾಸ್‌ಗಳು ಇದೆ.   ಹಾಟ್‌ ಸಾಸ್‌, ಸ್ವೀಟ್‌ ಸಾಸ್‌, ಟ್ಯಾಂಗಿ ಹೀಗೆ ಆಹಾರದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ ಎನ್ನುವ ಕಾರಣಕ್ಕಾಗಿ ಇವೆಲ್ಲಾ ನಮ್ಮ ತಟ್ಟೆಯಲ್ಲೊಂದು ಜಾಗಮಾಡಿಕೊಂಡಿದೆ. ಕೆಲವರು ಹಾಟ್‌ ಸಾಸ್‌ ಒಳ್ಳೆಯದೇ ಎಂದರೂ ಕೆಲವರು ಆರೋಗ್ಯಕ್ಕೆ ಒಳ್ಳೆಯದಲ್ಲವೆನ್ನುತ್ತಾರೆ. ಹಾಗಾದರೆ ಹಾಟ್‌ ಸಾಸ್‌ ತಿನ್ನಲೇಬಾರದಾ..?…

    Read More »
Back to top button