World News

  • Ramadan 2024: ಈ ಪವಿತ್ರ ತಿಂಗಳಿನಲ್ಲಿ ಯಾವೆಲ್ಲ ಕೆಲಸ ಮಾಡಬೇಕು? ಏನು ಮಾಡಬಾರದು?

    ಈ ವರ್ಷ ರಂಜಾನ್‌ ಮಾರ್ಚ್ 12, 2024ಕ್ಕೆ ಪ್ರಾರಂಭವಾಗಿ, ಏಪ್ರಿಲ್ 9, 2024ರಂದು ಮುಕ್ತಾಯಗೊಳ್ಳುತ್ತದೆ. ಈ ಹಬ್ಬ ತುಂಬಾ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತದೆ. ರಂಜಾನ್ ತಿಂಗಳಲ್ಲಿ ಓರ್ವ ಮುಸ್ಲಿಂ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಯಾವುವು ಅಂತಾ ಇಲ್ಲಿದೆ ನೋಡಿ. ಇಸ್ಲಾಂನಲ್ಲಿ ಮಹತ್ವದ ತಿಂಗಳು ಅಂದರೆ ಅದು ರಂಜಾನ್ (Ramadan).‌ ಇಂದಿನಿಂದ ರಂಜಾನ್‌ ಸಂಭ್ರಮ ಶುರುವಾಗಿದೆ. ಈ ಮಾಸವನ್ನು ಅತ್ಯಂತ ಪುಣ್ಯಭರಿತ ಮಾಸವೆಂದು ಮುಸ್ಲಿಂ (Muslims) ಬಾಂಧವರು ಪರಿಗಣಿಸುತ್ತಾರೆ. ಈ ಹಬ್ಬ ಸಹ ಸಮುದಾಯದ ದೊಡ್ಡ ಮತ್ತು ಸಂಭ್ರಮದ ಹಬ್ಬ. ಅಲ್ಲಾಹನಿಗೆ ಅಪಾರ ಭಕ್ತಿ…

    Read More »
  • Oscar Awards 2024: ಪ್ರಶಸ್ತಿ ಗೆಲ್ಲಬಹುದಾದ ಸಂಭಾವನೀಯ ಪಟ್ಟಿ ಇಲ್ಲಿದೆ

    ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಇವೆ. ಈಗಾಗಲೇ ಈ ಪ್ರಶಸ್ತಿ ಅರ್ಹವೆನಿಸಿಕೊಂಡಿರುವ ಸಿನಿಮಾಗಳ ಸಂಪೂರ್ಣ ಪಟ್ಟಿ ಕೂಡ ರಿಲೀಸ್ ಆಗಿದೆ. ಹಿಂದಿನ ವರ್ಷ ರಿಲೀಸ್ ಆಗಿ ಮೆಚ್ಚುಗೆ ಗಳಿಸಿ, ಈಗಾಗಲೇ ನಾಮನಿರ್ದೇಶನಗೊಂಡಿರುವ ಸಿನಿಮಾಗಳು ಪ್ರಶಸ್ತಿಗಾಗಿ ಪೈಪೋಟಿಗೆ ಬೀಳಲಿವೆ.   2023ರಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಾಕಷ್ಟು ಸಿನಿಮಾಗಳಲ್ಲಿ ಆಸ್ಕರ್ ಪ್ರಶಸ್ತಿ ಗೆಲ್ಲುವ ಸಂಭ್ರಮದಲ್ಲಿವೆ. ಅವುಗಳಲ್ಲಿ ಪ್ರಮುಖವಾಗಿ ‘ಓಪನ್‌ಹೈಮರ್’,’ಬಾರ್ಬಿ’, ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’, ‘ಪೂರ್ ಥಿಂಗ್ಸ್’, ‘ದಿ ಹೋಲ್ಡ್‌ಒವರ್ಸ್’ ಅಂತಹ ಸಿನಿಮಾಗಳು ಹೆಚ್ಚು ಕೆಟಗರಿಯಲ್ಲಿ…

    Read More »
  • Filmfare Awards: 69 ನೇ ಫಿಲ್ಮ್ ಫೇರ್ ಪ್ರಶಸ್ತಿ 2024 : ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

    ಹಿಂದಿ ಚಲನಚಿತ್ರೋದ್ಯಮದಲ್ಲಿನ ಅತ್ಯುತ್ತಮ ಅಭಿನಯ, ಚಲನಚಿತ್ರ ನಿರ್ಮಾಣ, ಕಥೆ, ಮತ್ತು ತಾಂತ್ರಿಕ ಉತ್ಕೃಷ್ಟತೆಯನ್ನು ಗೌರವಿಸಲು ಫಿಲ್ಮ್ಫೇರ್ ಪ್ರಶಸ್ತಿಗಳ ನೀಡಲಾಗಿದೆ. ಈ ವರ್ಷ, ಗುಜರಾತ್‌ ನಲ್ಲಿ ಎರಡು ದಿನಗಳ ಕಾಲ ಫಿಲ್ಮ್‌ ಫೇರ್‌ ಪ್ರಶಸ್ತಿ ಸಮಾರಂಭ ನಡೆದಿದ್ದು, ಗುಜರಾತ್ ಪ್ರವಾಸೋದ್ಯಮದೊಂದಿಗೆ 69 ನೇ ಹ್ಯುಂಡೈ ಫಿಲ್ಮ್ಫೇರ್ ಪ್ರಶಸ್ತಿ 2024 ಗುಜರಾತ್ನ ಗಿಫ್ಟ್ ಸಿಟಿಯಲ್ಲಿ ನಡೆಯಿತು.   69 ನೇ ಹ್ಯುಂಡೈ ಫಿಲ್ಮ್ಫೇರ್ ಪ್ರಶಸ್ತಿ 2024 ರಲ್ಲಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ: ಅತ್ಯುತ್ತಮ ಚಿತ್ರ 12TH FAIL ಅತ್ಯುತ್ತಮ ನಿರ್ದೇಶಕ ವಿಧು ವಿನೋದ್ ಚೋಪ್ರಾ (12TH FAIL)…

    Read More »
  • ಅಯೋಧ್ಯೆಯಲ್ಲಿ ರಾಮೋತ್ಸವ ಶುರು! ಒಂದು ವಾರದ ಸಂಪೂರ್ಣ ಕಾರ್ಯಕ್ರಮದ ವಿವರ ಇಲ್ಲಿದೆ

    ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಉದ್ಘಾಟನಾ ಸಮಾರಂಭ ನಡೆಯಲಿದೆ. ಜನವರಿ 22ರಂದು ಸೋಮವಾರ 2080 ರ ಪೌಷ ಶುಕ್ಲ ಕೂರ್ಮ ದ್ವಾದಶಿ, ವಿಕ್ರಮ ಸಂವತ್, ಅಂದರೆ ಸೋಮವಾರ, ಭಗವಾನ್ ರಾಮಲಲ್ಲಾ ಪ್ರಾಣ-ಪ್ರತಿಷ್ಠಾ (Pran Prathistha) ಕಾರ್ಯಕ್ರಮ ನಡೆಯಲಿದೆ.   ಎಲ್ಲಾ ಶಾಸ್ತ್ರೀಯ ಸಂಪ್ರದಾಯಗಳನ್ನು ಅನುಸರಿಸಿ, ಅಭಿಜಿತ್ ಮುಹೂರ್ತದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ನಡೆಸಲಾಗುವುದು. ಪ್ರಾಣ ಪ್ರತಿಷ್ಠಾ ಪೂರ್ವದ ಶುಭ ಆಚರಣೆಗಳು ನಾಳೆಯಿಂದ ಅಂದರೆ ಜನವರಿ 16ರಿಂದ ಪ್ರಾರಂಭವಾಗುತ್ತದೆ. ಈ ವಿಶೇಷ ಆಚರಣೆಗಳು ಜನವರಿ 21ರವರೆಗೆ ಮುಂದುವರಿಯುತ್ತದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಿ ಅರುಣ್ ಯೋಗಿರಾಜ್ ಅವರು…

    Read More »
  • ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ ಮುಂದೆ ಓದಿ….

    ಭಾರತೀಯ ಚಲನಚಿತ್ರೋದ್ಯಮವು ಅಸಾಧಾರಣವಾದ ಪ್ರತಿಭಾವಂತ ನಟ, ನಟಿಯರ ನೆಲೆಯಾಗಿದೆ. ದೇಶದೊಳಗೆ ಮಾತ್ರವಲ್ಲದೆ ಜಾಗತಿಕ ವೇದಿಕೆಯಲ್ಲೂ ಭಾರತದ ಚಲನಚಿತ್ರ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಈ ಜನಪ್ರಿಯತೆ ಅಧಿಕವಾಗುತ್ತಾ ಸಾಗಿದ್ದಂತೆ ನಟ, ನಟಿಯರ ಸಂಭಾವನೆಯೂ ಹೆಚ್ಚಾಗುತ್ತಾ ಸಾಗುತ್ತದೆ. ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆಯುವ ಜೊತೆಗೆ, ಈ ಕಲಾವಿದರು ಗಮನಾರ್ಹವಾದ ಸಂಪತ್ತನ್ನು ಸಂಗ್ರಹಿಸಿದ್ದಾರೆ. ಉದ್ಯಮದಲ್ಲಿ ಮಹಿಳಾ ತಾರೆಗಳು ಸಮಾನವಾಗಿ ಪ್ರಭಾವಶಾಲಿಯಾಗಿದ್ದಾರೆ. ಐಷಾರಾಮಿ ಜೀವನಶೈಲಿಯನ್ನು ನಟಿಯರು ಹೊಂದಿದ್ದಾರೆ. ಭಾರತದ ಟಾಪ್ 10 ಶ್ರೀಮಂತ ನಟಿಯರ ಪಟ್ಟಿ ಇಲ್ಲಿದೆ 1. ಐಶ್ವರ್ಯ ರೈ ಬಚ್ಚನ್ ಐಶ್ವರ್ಯ ರೈ ಬಚ್ಚನ್ ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ…

    Read More »
  • ಈ 8 ಸ್ಥಳಗಳಲ್ಲಿ ಅಪ್ಪಿತಪ್ಪಿಯೂ ನಿಮ್ಮ ಮೊಬೈಲನ್ನು ಇಟ್ಟುಕೊಳ್ಳುವುದು ತುಂಬಾ ಅಪಾಯ ಬಳಸಬೇಡಿ..!

    ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ.   ನೀವು ಮಲಗುವ ಕೊಠಡಿ ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು ಒಳ್ಳೆಯ ಬೆಳವಣಿಗೆಯಲ್ಲ ನಿಮ್ಮ ಆರೋಗ್ಯಕ್ಕಿಂತ…

    Read More »
  • Abhishek Bacchan- Aishwarya Rai: ದೂರವಾಗಿದ್ರೂ ಇನ್ನೂ ಡಿವೋರ್ಸ್ ನೀಡದಿರಲು ನಿಜವಾದ ಕಾರಣವೇನು ಗೊತ್ತಾ?

    ಒಂದೊಮ್ಮೆ ಬಾಲಿವುಡ್’ನ ಪವರ ಕಪಲ್ ಎಂದೇ ಪರಿಗಣಿಸಲ್ಪಟ್ಟಿದ್ದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇದೀಗ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂದ ಸುದ್ದಿ ಎಲ್ಲೆಡೆ ಹಬ್ಬುತ್ತಿದೆ. ಆದರೆ ಅಷ್ಟಕ್ಕೂ ಈ ಜೋಡಿ ಡಿವೋರ್ಸ್ ಪಡೆಯಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅಂದಹಾಗೆ ಕೆಲದಿನಗಳ ಹಿಂದೆ ಐಶ್ವರ್ಯಾ ರೈ, ಅಭಿಷೇಕ್ ಮನೆಬಿಟ್ಟು ಹೊರಬಂದಿದ್ದರು. ಇದೀಗ ಬೇರೆ ಬೇರೆಯಾಗಿಯೇ ಜೀವನ ನಡೆಸುತ್ತಿದ್ದಾರೆ, ಹೀಗಿದ್ದರೂ ಕೂಡ ಇವರಿಬ್ಬರು ಇನ್ನೂ ಡಿವೋರ್ಸ್ ಪಡೆದುಕೊಂಡಿಲ್ಲ. ಇದಕ್ಕೆ ಅಸಲಿ ಕಾರಣವೇನು ಎಂಬುದು ಸದ್ಯಕ್ಕೆ ಇರುವ ಪ್ರಶ್ನೆ. ವರದಿಗಳ ಪ್ರಕಾರ, ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ…

    Read More »
  • ಭೀಕರ ಅಪಘಾತ; ಸ್ಥಳದಲ್ಲೇ 6 ಜನರು ದುರ್ಮರಣ

    ನಾಗ್ಪುರ: ಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ 6 ಜನರು ಸಾವನ್ನಪ್ಪಿರುವ ಘ್ಟನೆ ಮಹಾರಾಷ್ಟ್ರದ ನಾಗ್ಪುರದ ಸೋನ್ ಖಾಂಬ್ ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿ 7 ಜನರು ಪ್ರಯಾಣಿಸುತ್ತಿದ್ದರು. ಮದುವೆ ಸಮಾರಂಭದಿಂದ ವಾಪಾಸ್ ಆಗುತಿದ್ದಾಗ ಈ ದುರಂತ ಸಂಭವಿಸಿದೆ. ಮೃತರನ್ನು ಅಜಯ್ ದಶರತ್ (45), ವಿಠಲ್ ದಿಂಗಂಬರ್ ತೋಟೆ (45), ಸುಧಾಕರ್ ರಾಮಚಂದ್ರ ಮಾನಕರ್(42), ರಮೇಶ್ ಓಂಕಾರ್(48), ಮಯೂರ್ ಮೂರೇಶ್ವರ್ ಇಂಗ್ಲೆ (26), ವೈಭವ್ (32) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ನಾಗ್ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    Read More »
Back to top button