ಸಂಸದೆ ಮಂಗಳಾ ಅಂಗಡಿ ಮನೆಗೆ ನಡ್ಡಾ ಭೇಟಿ: ತೀವ್ರ ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ

WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯಲ್ಲಿ ಬಿಜೆಪಿಯ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಂಗಳವಾರ ಸಂಜೆ ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಸಂಸದೆ ಮಂಗಲಾ ಅಂಗಡಿ ಮನೆಗೆ ದಿಢೀರ್ ಭೇಟಿ ನೀಡಿದ್ದು ನಾನಾ ವಿಶ್ಲೇಷಣೆಗೆ ಕಾರಣವಾಗಿದೆ.

 

ಹೌದು… ಕೋರ್ ಕಮಿಟಿ ಸಭೆ ಕಾರಣ ಬೆಳಗಾವಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ್ದು,  ಶೆಟ್ಟರ್​ ಟಿಕೆಟ್‌ ಕೈ ತಪ್ಪುತ್ತಾ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಬೆಳಗಾವಿ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಸಭೆ ನಡೆದಿದ್ದು,ಸಾಕಷ್ಟು ಮಹತ್ವದ ಚರ್ಚೆಗಳೂ ಆಗಿವೆ. ಮಹತ್ವದ ರಣತಂತ್ರಗಳನ್ನೂ ಹೆಣೆಯಲಾಗಿದೆ. ಸದ್ಯ ಬೆಳಗಾವಿ ಟಿಕೆಟ್ ಜಗದೀಶ್ ಶೆಟ್ಟರ್​ಗೆ ಕೊಡೋ ಸಾಧ್ಯತೆ ಇದೆ ಅನ್ನೋ ಚರ್ಚೆ ನಡುವೆ ಮಂಗಳಾ ಅಂಗಡಿ ನಿವಾಸಕ್ಕೆ ಖುದ್ದು ನಡ್ಡಾ ಭೇಟಿ ಕೊಟ್ಟಿರೋದು ಕುತೂಹಲಕ್ಕೆ ಕಾರಣವಾಗಿದೆ.  ಒಟ್ಟಾರೆ ಲೋಕಸಭೆ ಎಲೆಕ್ಷನ್ ಡೇಟ್​ ಅನೌನ್ಸ್​ಗೂ ಮೊದಲೇ ಟಿಕೆಟ್ ಪಡೆಯಲು, ಗೆಲ್ಲಲು ತಂತ್ರಗಳು, ಕಸರತ್ತುಗಳು ಶುರುವಾಗಿವೆ.  ಸಂಸದೆ ಅಂಗಡಿ ಮನೆಗೆ ನಡ್ಡಾ ಭೇಟಿ ವೇಳೆ ಬಿ.ವೈ ವಿಜಯೇಂದ್ರ, ಪ್ರಹ್ಲಾದ ಜೋಶಿ ಕೂಡ ಹಾಜರಿದ್ದರು. ಲೋಕಸಭೆ ಟಿಕೆಟ್ ವಿಚಾರವಾಗಿ ಒಂದಷ್ಟು ಚರ್ಚೆಯೂ ನಡೆದಿದೆ. ಭೇಟಿಯ ಬಳಿಕ ಮಾತನಾಡಿದ ಮಂಗಳಾ ಸುರೇಶ್ ನಮ್ಮ ಕುಟುಂಬಕ್ಕೆ ಟಿಕೆಟ್ ಕೊಡಿ ಅಂತಾ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

 

ಕಳೆದ ಉಪಚುನಾವಣೆಯಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಮಂಗಲಾ ಸುರೇಶ ಅಂಗಡಿ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪ ಬಹುದು ಎಂಬ ವದಂತಿ ಹರಡಿದೆ. ಈ ನಿಟ್ಟಿನಲ್ಲಿ ಮಂಗಲಾ ಅಂಗಡಿ ಅವರು ಜಯಪ್ರಕಾಶ್ ನಡ್ದಾ ಅವರನ್ನು ಭೇಟಿ ಆಗಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಮಂಗಲಾ ಅಂಗಡಿಯವರ ಪತಿ ದಿ.ಸುರೇಶ ಅಂಗಡಿ ಅವರು ಕಳೆದ ಎರಡೂವರೆ ದಶಕಗಳಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದಾರೆ. ಈ ಬಲವಾದ ಹಿಡಿತವನ್ನು ಮುಂದುವರಿಸಿಕೊಂಡು ಹೋಗುವ ತಂತ್ರವಾಗಿ ಮಂಗಲಾ ಅಂಗಡಿ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿರುವ ಸಾಧ್ಯತೆಗಳು ಇವೆ. ಯಾವುದೇ ಕಾರಣಕ್ಕೂ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ಯರ ಪಾಲಾಗಬಾರದು ಎಂಬ ಪರೋಕ್ಷ ಸಂದೇಶವನ್ನು ಅವರು ರವಾನಿಸಿದಂತಿದೆ.

WhatsApp Group Join Now
Telegram Group Join Now
Back to top button