ಧಾರವಾಡ ದಲ್ಲಿ ಜನತಾ ದರ್ಶನ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್.

4ನೇ ಜನತಾ ದರ್ಶನ ಕೇವಲ 93 ಅರ್ಜಿಗಳ ಆಗಮನ

WhatsApp Group Join Now
Telegram Group Join Now

ಧಾರವಾಡ ಜಿಲ್ಲಾ ಉಸ್ತವಾರಿ ಸಚಿವ ಸಂತೋಷ ಲಾಡ ಅವರ ಅಧ್ಯಕ್ಷತೆಯಲ್ಲಿ ಇಂದು ನಾಲ್ಕನೇ ಜನತಾ ದರ್ಶನ ನಡೆಸಲಾಗಿದ್ದು, ಸಾರ್ವಜನಿಕರಿಂದ ಒಟ್ಟು 93 ಅರ್ಜಿಗಳು ಸಲ್ಲಿಕೆಯಾದವು.

 

ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಧಾರವಾಡ ಜಿಲ್ಲೆಯಲ್ಲೂ ನಾಲ್ಕನೇ ಜನತಾ ದರ್ಶನ ಕಾರ್ಯಕ್ರಮ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ನಡೆಯಿತು.

ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೇವಲ 93 ಅರ್ಜಿಗಳು ಮಾತ್ರ ಬಂದದ್ದು ಗಮನಾರ್ಹ ಸಂಗತಿ. ಪ್ರತಿ ಬಾರಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 200 ಗಡಿ ದಾಟಿ ಅರ್ಜಿಗಳು ಬರುತ್ತಿದ್ದವು. ವಿವಿಧ ಇಲಾಖೆಗೆ ಸಂಬಂಧಿಸಿದ ಸಮಸ್ಯೆಯ ಅರ್ಜಿಗಳು ಇವಾಗಿರುತ್ತಿದ್ದವು. ಆದರೆ, ನಾಲ್ಕನೇ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೇವಲ 93 ಅರ್ಜಿಗಳು ಮಾತ್ರ ಬಂದಿವೆ. ಅವುಗಳಲ್ಲಿ ಕಳೆದ ಬಾರಿಯ ಜನತಾ ದರ್ಶನದಲ್ಲಿ ಬಂದಿರುವ ಅರ್ಜಿಗಳೇ ಬಂದಿದ್ದವು.

 

ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್ ಕೆಲವೊಂದಿಷ್ಟು ವೈಯಕ್ತಿಕ ಸಮಸ್ಯೆ, ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಮೂಲ ಸೌಲಭ್ಯಕ್ಕೆ ಸಂಬಂಧಿಸಿದ ಅರ್ಜಿಗಳು ಹಾಸ್ಟೆಲ್‌ ಸಮಸ್ಯೆ.ಗಳು ಬಂದಿವೆ ಎಂದರು ಸಚಿವರಿಗೆ ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಜಿಲ್ಲಾ ಪಂಚಾಯ್ತಿ ಸಿಇಒ ಸ್ವರೂಪಾ ಟಿ.ಕೆ., ಪೊಲೀಸ್‌ ಆಯುಕ್ತ ರೇಣುಕಾ ಸುಕುಮಾರ, ಎಸ್‌ಪಿ ಡಾ.ಗೋಪಾಲ ಬ್ಯಾಕೋಡ ಸೇರಿದಂತೆ ಇತರ ಅಧಿಕಾರಿಗಳು ಸಾಥ್ ನೀಡಿದರು.

WhatsApp Group Join Now
Telegram Group Join Now
Back to top button