ಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ

WhatsApp Group Join Now
Telegram Group Join Now

*ಬೆಳಗಾವಿ ಜೈ ಜವಾನ್ ಜೈ ಕಿಸಾನ್ ಹಾಗೂ ಸರ್ವ್ ಲೋಕಸೇವಾ ಫೌಂಡೇಶನಗಳ ಕಾರ್ಯಕ್ಕೆ ಜನರ ಮೆಚ್ಚುಗೆಯ ಮಹಾಪೂರ*

ಖಾನಾಪುರ ತಾಲೂಕಿನ ಮೇರಡಾ ಗ್ರಾಮದ ಸಾಯಿಷ್ ಪಾಟೀಲ್ ವಯಸ್ಸು 9ವರ್ಷ ಈತನ ಬಲಗೈ ಮೌಸ್ ಖಂಡಗಳ ವಿಪರೀತ ನೋವಿನಿಂದ ಬಳಲ್ತಿತ್ತು ಇದನ್ನು ಗುಣ ಪಡಿಸಲು ಹಲವಾರು ವೈದ್ಯರಕಡೆ ಕುಟುಂಬಸ್ಥರು ಅಲೆದಾಡಿದರು ಅಪಾರ ಪ್ರಮಾಣದ ಹಣ ಖರ್ಚು ಮಾಡಿದರು ನೋವು ಮಾತ್ರ ಕಡಿಮೆ ಆಗಿರಲಿಲ್ಲ.

ಕುಟುಂಬಸ್ಥರು ದಿಕ್ಕು ತೋಚದೇ ಕುಂತಿದ್ದರು ಬಡ ಕುಟುಂಬವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆ ಪಡೆಯಲಾರದೆ ಹಣ ಹೊಂದಿಸಲು ಪರದಾಡುತ್ತಿದ್ದರು.

ಇದನ್ನು ಬೆಳಗಾವಿಯ ಜೈ ಜವಾನ್ ಜೈ ಕಿಸಾನ್ ಸಂಘಟನೆ ಹಾಗೂ ಸರ್ವ್ ಲೋಕಸೇವಾ ಫೌಂಡೇಶನ್ ಮುಖಂಡರಿಗೆ ತಿಳಿಸಿದಾರೆ.

ಇದನ್ನು ಮನಗೊಂಡು ಎರಡು ಸಂಘಟನೆ ಅಧ್ಯಕ್ಷರಾದ ಗೋವಿಂದ್ ಪಾಟೀಲ್ ಹಾಗೂ ವೀರೇಶ್ ಹಿರೇಮಠ್ ಇವರು ಶಸ್ತ್ರ ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಇವರ ಕಾರ್ಯ ಜನರ ಮೆಚ್ಚುಗೆಗೆ ಪಾತ್ರ ವಾಗಿದೆ

ಗೋವಿಂದ್ ಪಾಟೀಲ್ ಹಾಗೂ ವೀರೇಶ್ ಹಿರೇಮಠ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ .

ವಿಜಯಾ ಹಾಸ್ಪಿಟಲ್ ಬೆಳಗಾವಿಯಲ್ಲಿ ಬಾಲಕನಿಗೆ ವೈದ್ಯ ರವಿ ಪಾಟೀಲ್ ಶಸ್ತ್ರ ಚಿಕಿತ್ಸೆ ನಡೆಸಿ ನೋವನು ನಿವಾರಿಸಿದ್ದಾರೆ.

ಮಗುವಿನ ಕೈ ಸಹಜ ಸ್ಥಿತಿಗೆ ಮರಳಿದೆ ಮಾದ್ಯಮ ಹಾಗೂ ಕುಟುಂಬಸ್ಥರು ಜೈ ಜವಾನ್ ಜೈ ಕಿಸಾನ್ ಸಂಘಟನೆ ಹಾಗೂ ಸರ್ವ್ ಲೋಕಸೇವಾ ಫೌಂಡೇಶನ್ಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ

WhatsApp Group Join Now
Telegram Group Join Now
Back to top button