ಬೆಳಗಾವಿ ಪೊಲೀಸ್ ಕಮೀಷನರೇಟ್ ಕಾರ್ಯಕ್ಕೆ ಜನತೆಯ ಮೆಚ್ಚುಗೆ

WhatsApp Group Join Now
Telegram Group Join Now

ಬೆಳಗಾವಿ: ಪೊಲೀಸ್ ಕಮಿಷನರೇಟ್ ಪ್ರಾಯೋಜಕತ್ವದಲ್ಲಿ ಮಾದಕ ದ್ರವ್ಯ ಮುಕ್ತ ಬೆಳಗಾವಿ ನಗರ ನಿರ್ಮಿಸಲು ಶುಕ್ರವಾರ ನಗರದಲ್ಲಿ ಜನಜಾಗೃತಿ ಮೂಡಿಸಲಾಯಿತು.

ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಪೊಲೀಸ್  ಆಯುಕ್ತ ಸಿದ್ದರಾಮಪ್ಪ ಹಾಗೂ  ಪೊಲೀಸ್  ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಕೈಗೊಂಡು ಮಾದಕ ದ್ರವ್ಯ ಸೇವನೆ ವಿರುದ್ಧ ಬ್ಯಾನರ್ ಹಾಗೂ ಘೋಷಣೆಗಳೊಂದಿಗೆ ಸಾರ್ವಜನಿಕರಲ್ಲಿ ಅದರ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರು.

ಇದರೊಂದಿಗೆ ಮಾದಕ ದ್ರವ್ಯ ವಿರೋಧಿ  ಜಾಗೃತಿ  ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡು ಸುಮಾರು 40 ಪೊಲೀಸ್ ಅಧಿಕಾರಿಗಳು,  ನಗರದ 31 ವಿವಿಧ ಶಾಲಾ-ಕಾಲೇಜುಗಳಿಗೆ  ಭೇಟಿ ನೀಡಿ ಸುಮಾರು 5,500 ವಿದ್ಯಾರ್ಥಿಗಳಿಗೆ ಅದರ ದುಷ್ಪರಿಣಾಮಗಳ ಕುರಿತಾಗಿ  ಅರಿವು ಮೂಡಿಸುವುದರೊಂದಿಗೆ  ವಿದ್ಯಾರ್ಥಿಗಳಲ್ಲಿ ಈ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿ, ಮಾದಕ ದ್ರವ್ಯ ವಸ್ತುಗಳ ಮುಕ್ತ ಬೆಳಗಾವಿ ನಗರವನ್ನಾಗಿಸಲು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಒಟ್ಟಾರೆ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ಈ ಕಾರ್ಯ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.

WhatsApp Group Join Now
Telegram Group Join Now
Back to top button