BREAKING: ‘ಕರ್ನಾಟಕ ಕಾಂಗ್ರೆಸ್’ನಿಂದ ‘ಲೋಕಸಭಾ ಚುನಾವಣೆ’ಗೆ ಭರ್ಜರಿ ಸಿದ್ಧತೆ: ಹೀಗಿದೆ ಲೋಕಸಭಾ ಚುನಾವಣೆಗಾಗಿ ನೇಮಕ ಮಾಡಲಾಗಿರುವಂತ ಜಿಲ್ಲಾ ಸಂಯೋಜಕರ ಪಟ್ಟಿ

WhatsApp Group Join Now
Telegram Group Join Now

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ( KPCC)ಯಿಂದ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಚುನಾವಣಾ ಮುಂಚಿತವಾಗಿ 28 ಜಿಲ್ಲೆಗಳಿಗೆ ಜಿಲ್ಲಾ ಸಂಯೋಜಕರನ್ನಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.

 

ಈ ಕುರಿತಂತೆ ಇಂದು ಆದೇಶಿಸಿರುವಂತ ಅವರು, ಮುಂಬರುವ 2024 ರ ಸಾರ್ವತ್ರಿಕ ಚುನಾವಣೆಗೆ ಸಂಸತ್ ಕ್ಷೇತ್ರವಾರು ಸಂಯೋಜಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿದೆ ಎಂದಿದ್ದಾರೆ.

ಗೌರವಾನ್ವಿತ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಇದನ್ನು ಈ ಕೆಳಗಿನಂತೆ ಮಾರ್ಪಡಿಸಲಾಗಿದೆ. ಈ ಕೆಳಗಿನ ಬದಲಾವಣೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಜವಾಬ್ದಾರಿಗಳನ್ನು ತೆಗೆದುಕೊಳ್ಳುವಂತೆ ನಾನು ಎಲ್ಲಾ ಮಂತ್ರಿಗಳನ್ನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಹೀಗಿದೆ ಲೋಕಸಭಾ ಚುನಾವಣೆಗಾಗಿ ನೇಮಕ ಮಾಡಲಾಗಿರುವಂತ ಜಿಲ್ಲಾ ಸಂಯೋಜಕರ ಪಟ್ಟಿ

  1. ಬಾಗಲಕೋಟೆ-ಆರ್.ಬಿ ತಿಮ್ಮಾಪುರ್
  2. ಬೆಂಗಳೂರು ಕೇಂದ್ರ – ಜಮೀನ್ ಅಹ್ಮದ್ ಖಾನ್
  3. ಬೆಂಗಳೂರು ಉತ್ತರ – ಕೃಷ್ಣಬೈರೇಗೌಡ
  4. ಬೆಂಗಳೂರು ಗ್ರಾಮಾಂತರ – ಡಾ.ಎಂ.ಸಿ ಸುಧಾಕರ್
  5. ಬೆಂಗಳೂರು ದಕ್ಷಿಣ – ರಾಮಲಿಂಗಾರೆಡ್ಡಿ
  6. ಬೆಳಗಾವಿ- ಸತೀಶ್ ಜಾರಕಿಹೊಳಿ
  7. ಬಳ್ಳಾರಿ-ಬಿ.ನಾಗೇಂದ್ರ
  8. ಬೀದರ್-ಈಶ್ವರ್ ಖಂಡ್ರೆ
  9. ಬಿಜಾಪುರ – ಎಂ.ಬಿ ಪಾಟೀಲ್
  • ಚಾಮರಾಜನಗರ – ಕೆ.ವೆಂಕಟೇಶ್
  • ಚಿಕ್ಕಬಳ್ಳಾಪುರ-ಕೆ.ಹೆಚ್ ಮುನಿಯಪ್ಪ
  • ಚಿಕ್ಕೋಡಿ- ಲಕ್ಷ್ಮೀ ಹೆಬ್ಬಾಳ್ಕರ್
  • ಚಿತ್ರದುರ್ಗ – ಡಿ ಸುಧಾಕರ್
  • ದಕ್ಷಿಣ ಕನ್ನಡ – ದಿನೇಶ್ ಗುಂಡೂರಾವ್
  • ದಾವಣಗೆರೆ-ಎಸ್ ಎಸ್ ಮಲ್ಲಿಕಾರ್ಜುನ್
  • ಧಾರವಾಡ- ಸಂತೋಷ್ ಲಾಡ್
  • ಗುಲ್ಬರ್ಗಾ-ಪ್ರಿಯಾಂಕ್ ಖರ್ಗೆ
  • ಹಾಸನ – ಕೆ.ಎನ್ ರಾಜಣ್ಣ
  • ಹಾವೇರಿ – ಹೆಚ್ ಕೆ ಪಾಟೀಲ್
  • ಕೋಲಾರ- ಬಿಎಸ್ ಸುರೇಶ್
  • ಕೊಪ್ಪಳ – ಶಿವರಾಜ್ ತಂಡರಗಿ
  • ಮಂಡ್ಯ – ಚೆಲುವರಾಯಸ್ವಾಮಿ
  • ಮೈಸೂರು ಡಾ.ಹೆಚ್ ಸಿ ಮಹದೇವಪ್ಪ
  • ರಾಯಚೂರು- ಎನ್ ಎಸ್ ಬೊಸರಾಜು
  • ಶಿವಮೊಗ್ಗ – ಮಧು ಬಂಗಾರಪ್ಪ
  • ತುಮಕೂರು – ಡಾ.ಜಿ ಪರಮೇಶ್ವರ್
  • ಉಡುಪಿ-ಚಿಕ್ಕಮಗಳೂರು – ಕೆ.ಜೆ ಜಾರ್ಜ್
  • ಉತ್ತರ ಕನ್ನಡ – ಮಂಕಾಳೆ ವೈದ್ಯ

WhatsApp Group Join Now
Telegram Group Join Now
Back to top button